Slide
Slide
Slide
previous arrow
next arrow

ಗುತ್ತಿಗೆ – ಹೊರ ಗುತ್ತಿಗೆ ಕಾರ್ಮಿಕರಿಗೆ ಕಹಿಯಾದ ರಾಜ್ಯ ಬಜೆಟ್ : ಡಿ.ಸ್ಯಾಮಸನ್

300x250 AD

ದಾಂಡೇಲಿ : ಕರ್ನಾಟಕ ರಾಜ್ಯ ಸರ್ಕಾರದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಮಂಡಿಸಿದ ಬಜೆಟ್‌ನಲ್ಲಿ ಗುತ್ತಿಗೆ- ಹೊರಗುತ್ತಿಗೆ ಮುನ್ಸಿಪಲ್ ಕಾರ್ಮಿಕರ ಖಾಯಂಮಾತಿ ಪ್ರಸ್ತಾಪವಿರಲಿ, ಅವರನ್ನು ನೇರ ಪಾವತಿಯಡಿಯಲ್ಲಿ ತರಲು ಸಹ ಮುಂದಾಗದಿರುವ ಕಾರಣ ಗುತ್ತಿಗೆ, ಹೊರಗುತ್ತಿಗೆ ಮುನ್ಸಿಪಾಲ್ ಕಾರ್ಮಿಕರ ಪಾಲಿಗೆ ಈ ಬಜೆಟ್ ಕಹಿಯಾದ ಬಜೆಟ್ ಆಗಿದೆ ಎಂದು ಕರ್ನಾಟಕ ರಾಜ್ಯ ಮುನ್ಸಿಪಾಲ್ ಕಾರ್ಮಿಕರ ಸಂಘಟನೆಯ ಜಿಲ್ಲಾಧ್ಯಕ್ಷರಾದ ಡಿ.ಸ್ಯಾಮಸನ್ ಅಭಿಪ್ರಾಯಿಸಿದ್ದಾರೆ.

ಅವರು ನಗರದಲ್ಲಿ ಮಾಧ್ಯಮಕ್ಕೆ‌ ನೀಡಿದ ಪ್ರಕಟಣೆಯಲ್ಲಿ ಈ ಬಜೆಟ್ ಅಧಿವೇಶನಕ್ಕೆ ಮುಂಚಿತವಾಗಿ ಗುತ್ತಿಗೆ- ಹೊರಗುತ್ತಿಗೆ ಆಧಾರದಲ್ಲಿ ದುಡಿಯುತ್ತಿರುವಂತಹ ಎಲ್ಲಾ ಮುನ್ಸಿಪಲ್ ಕಾರ್ಮಿಕರನ್ನು ಕನಿಷ್ಠ ನೇರ ಪಾವತಿಗೆ ತರುವುದಕ್ಕಾದರೂ ಕ್ರಮಗಳನ್ನು ವಹಿಸುವಂತೆ ಒತ್ತಾಯಿಸಲಾಗಿತ್ತು‌. ಈ ಸಾಲಿನ ಬಜೆಟಿನಲ್ಲಿ ಕನಿಷ್ಠ ಈ ಎಲ್ಲಾ ಕಾರ್ಮಿಕರನ್ನು ನೇರ ಪಾವತಿಯಡಿಯಲ್ಲಿ ತಂದು ರಾಜ್ಯ ಸರ್ಕಾರದ ಬೊಕ್ಕಸಕ್ಕೆ ವಾರ್ಷಿಕ ಶೇಕಡ 30ರಷ್ಟು ವೆಚ್ಚದ ಉಳಿತಾಯಕ್ಕೆ ಇದ್ದ ಸಾಧ್ಯತೆಯನ್ನು ಸರ್ಕಾರ ಪರಿಗಣಿಸದೆ ಇರುವುದನ್ನು ಕರ್ನಾಟಕ ರಾಜ್ಯ ಮುನ್ಸಿಪಲ್ ಕಾರ್ಮಿಕರ ಸಂಘವು ತೀವ್ರವಾಗಿ ಖಂಡಿಸುತ್ತದೆ ಎಂದಿದ್ದಾರೆ.

300x250 AD
Share This
300x250 AD
300x250 AD
300x250 AD
Back to top